ಅಂದು ಕಾರ್ಮಿಕ ಇಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ !
ಭಟ್ಕಳ; ಬದುಕು ಹೋರಾಟಮಯವಾಗಿದ್ದರೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ಮುಟ್ಟಿಸುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನಾವು ಆಗಾಗ ಕಾಣುತ್ತಲೇ ಇರುತ್ತೇವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ನಿರ್ದೇಶನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಬಂದರು ಸಚಿವ ಮಂಕಾಳು ವೈದ್ಯರವರು. ಬಾಲ್ಯದಲ್ಲಿ ಕಡುಬಡತನದಲ್ಲೇ ಬೆಳೆದ ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಣಕ್ಕೆ ತೀಲಾಂಜಲಿ ನೀಡಿ ಹೊಟೆಲ್ ಸೇರಿದಂತೆ ಹಲವು ಕಡೆ ಕೂಲಿ ಮಾಡಿ ಬದುಕಿಗೊಂದು ಆಸೆ ಕೊಂಡುಕೊಳ್ಳಲು ಯತ್ನಿಸಿದವರು. ಆದರೆ ಮನಸ್ಸಿನಲ್ಲಿ ತಾನು ಏನನ್ನಾದರೂ ಸಾಧಿಸಬೇಕು ಎಂಬ ಕನಸು