Karnataka

Karnataka
General News Health & Medicine Karnataka Uttara Kannada

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್ಟನಿಂದ ಆರ್ಥಿಕ ನೆರವು :

ಕುಮಟಾ : ತಾಲೂಕಿನ ಮಿರ್ಜಾನ ಖಂಡಗಾರ ಮೂಲದ ನೀತಾ ನಿಲೇಶ್‌ ಭೋಸ್ಲೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೆಚ್ಚಿನ ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್‌ (ರಿ) ಗೋಕರ್ಣದ ವತಿಯಿಂದ ಮೆನೆಜಿಂಗ್‌ ಟ್ರಸ್ಟಿ ಗೋವಿಂದ ಗೌಡರವರು ಹದಿನೈದು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.   ಕುಮಟಾದ ಡಾ. ಮಣಕಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕುಟುಂಬದವರು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದು  ಕ್ಯಾನ್ಸರ್‌  ಸೌಲಭ್ಯಹೊಂದಿರುವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದನ್ನು ಮನಗಂಡು  ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ

Read More
Articles General News Karnataka Uncategorized Uttara Kannada

ಮತ್ತೆ ಚರ್ಚೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಡಾ. ಕುಸುಮ ಸೊರಬ ರಂತೆ ಗಟ್ಟಿ ನಿಲುವು ತಾಳುವರೇ ಡಾ. ಜಿ. ಜಿ. ಹೆಗಡೆ 

ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ  ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ. ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು

Read More
General News Karnataka National Uttara Kannada

ಸೀ ಬರ್ಡ ನಿರಾಶ್ರಿತರ ಕುರಿತು  ಸಂಸದ ಕಾಗೇರಿಯಿಂದ ರಕ್ಷಣಾ ಸಚಿವರ ಭೇಟಿ :

ಶಿರಸಿ :  ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ದ  ರಾಜನಾಥ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು. ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು

Read More
Karnataka Sport Uttara Kannada

ಗೋಕರ್ಣ ಪ್ರೀಮಿಯರ್‌ ಲೀಗ್‌ (GPL), MCC ವಾರಿಯರ್‌ ತಂಡ ಚಾಂಪಿಯನ್‌ :

ಗೋಕರ್ಣ : ಗೋಗರ್ಭ ಕ್ರಿಕೆಟ್ ಕ್ಲಬ್’ ಇವರ ಆಶ್ರಯದಲ್ಲಿ ಕಳೆದ 7 ದಿನಗಳಿಂದ ಗೋಕರ್ಣದ ಗೋಗರ್ಭ ಮೈದಾನದಲ್ಲಿ ನಡೆಯುತ್ತಿದ್ದ ”ಗೋಕರ್ಣ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ MCC ವಾರಿಯರ್‌ ತಂಡ ಚಾಂಪಿಯನ್‌ ಪಟ್ಟ ಧರಿಸಿತು.  MCC ವಾರಿಯರ್ಸ್ ಹಾಗೂ ಅಶ್ವಥ್ ಗಣಪತಿ ಹಂಟರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ MCC ವಾರಿಯರ್ಸ್ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಫಯನಲ್‌ ಕಪ್‌ ತನ್ನದಾಗಿಸಿಕೊಂಡಿತು. ತೀವ್ರ ಕುತೂಹಲ ಮೂಡಿಸಿದ ಫೈನಲ್‌ ಪಂದ್ಯ ಸಾವಿರಾರು

Read More
Art & Culture Articles General News Karnataka Uncategorized

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ:

ಮಂಡ್ಯ : ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಹೆಸರಾದ ಗೊ.ರು. ಚೆನ್ನಬಸಪ್ಪ ರವರು ಡಿಸೆಂಬರ ತಿಂಗಳು ೨೦ ರಿಂದ ೨೨ ರ ವರೆಗೆ ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರಿಗೆ ಮಣೆ ಹಾಕಲಾಗುವ ಸಂಬಂಧ ಹಿಟ್ಟಿಕೊಂಡ ಚರ್ಚೆಗೆ ಇತೀಶ್ರೀ ಹಾಕಲಾಗಿದೆ. ಬಾಲ್ಯ ಜೀವನ  :  ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು

Read More
Art & Culture General News Health & Medicine Karnataka Sport Uttara Kannada

ಬಿಲ್ವಿದ್ಯೆ ಸ್ಪರ್ಧೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಯುಕ್ತಾ ಗೌಡಳಿಗೆ ಬೇಕಿದೆ ಆರ್ಥಿಕ ನೆರವು :

ಕುಮಟಾ : ತಾಲೂಕಿ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ  ಹರ್ಕಡೆ ಗ್ರಾಮದ ಯುಕ್ತಾ ಸತೀಶ ಗೌಡ ಈ ಶೈಕ್ಷಣಿಕ ರ್ಷದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಿಲ್ವಿದ್ಯೆ ಕುರಿತಂತೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮಾಡಿದ್ದಾಳೆ. ಆ ಮೂಲಕ  ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದ ಲ್ಲಿ ಗುರಿಯಿಡಲು ಮುಂದಡಿ ಇಟ್ಟಿದ್ದಾಳೆ.  ಆದರೆ ರಾಷ್ಟ್ರಮಟ್ಟದಲ್ಲಿ   ಬಿಲ್ಲುಗಾರಿಕೆಯ ಉತ್ತಮ ಕಿಟ್‌ ಬಳಸಿ ಪ್ರದರ್ಶನ ನೀಡಲು ಆರ್ಥಿಕ ಹಿಂಜರಿತ ಕಟ್ಟಿಹಾಕಿದೆ. ಕುಮಾರಿ ಯುಕ್ತಾ, ಹರಕಡೆ ಮೂಲದ ಹಾಲಕ್ಕಿ

Read More
Karnataka Lifestyle Uncategorized Uttara Kannada

ಗೋಕರ್ಣ ಸಿಡಿಲು ಬಡಿದು ನಾಲ್ವರಿಗೆ ಗಾಯ :

 ಕುಮಟಾ : ತರಕಾರಿ ಖರೀದಿಸಲು ವಾರದ ಸಂತೆಗೆ ತೆರಳಿದವರಿಗೆ  ಏಕಾಏಕಿ ಅಬ್ಬರಿಸಿದ ಸಿಡಿಲು ಬಡಿದು  ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ನಾಲ್ಕು ಗಂಟೆ ಸುಮಾರಿಗೆ  ಭಾರಿ ಗುಡುಗು ಮಿಂಚಿನೊಂದಿಗೆ  ಮಳೆ ಅಬ್ಬರಿಸುತ್ತಿದ್ದ ವೇಳೆ ತರಕಾರಿ ಖರೀದಿಗೆ ತೆರಳಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದು ಆ ವೇಳೆ ಸಿಡಿಲು ಅಪ್ಪಳಿಸಿ  ಗಾಯಗೊಂಡಿದ್ದರು. ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ ,

Read More
Art & Culture Articles Karnataka Uttara Kannada

ಗೋಕರ್ಣ ಭಾಗದ   ತುಳಸಿ ಪೂಜೆಗೆ ಹಾಲಕ್ಕಿಗರ ವಿಶೇಷ ಮೆರಗು :

ಗೋಕರ್ಣ : ಕಾರ್ತಿಕ ಮಾಸದಲ್ಲಿ ಆಚರಿಸುವ  ತುಳಸಿ ಪೂಜೆ ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದು. ಸಾಮಾನ್ಯವಾಗಿ ತುಳಸಿ ಹಬ್ಬ ಒಂದು ದಿನಕ್ಕೆ ಸೀಮಿತವಾಗಿರುವುದು. ಆದರೆ ಗೋಕರ್ಣ ಭಾಗದ ಹಾಲಕ್ಕಿ ಸಮಾಜದಲ್ಲಿ ಮೂರು ದಿನಗಳ ಕಾಲ ತುಳಸಿ ಮದುವೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಆಚರಿಸುವುದು ವಿಶೇಷ.ದ್ವಾದಶಿಯಂದು ಮುಂಜಾನೆಯಿಂದಲೇ ಪೂಜೆಯ ಸಿದ್ದತೆ, ತುಳಸಿ ಕಟ್ಟೆ ಸುತ್ತಲೂ ಸಗಣಿಯಿಂದ ಸಾರಿಸಿ, ಹಲಿಯ ರಂಗವಲ್ಲಿ ಹಾಕಿ ಮಹಿಳೆಯರು ಆರಂಭಿಕ ಸಿದ್ದತೆ ಮಾಡಿದರೆ ಮಧ್ಯಾಹ್ನದಿಂದ ಪುರುಷರು ಕಬ್ಬು, ಗೊಂಡೆ ಹೂವಿನ ಮಾಲೆಗಳಿಂದ

Read More
General News Karnataka Uncategorized

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರದ ಅಪಪ್ರಚಾರ  :  ಶಾಸಕ ದಿನಕರ ಶೆಟ್ಟಿ

ಕುಮಟಾ: ಕೆಲವೊಂದು ಮಾಧ್ಯಮ ಮತ್ತು ವಾಹಿನಿಗಳಲ್ಲಿ ತನ್ನವಿರುದ್ದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.ಅವರು ಮಂಗಳವಾರ ಮಾಧ್ಯಮದೊಂದಿಗೆ ಮಾತನ್ನಾಡುತ್ತಾ ಕುಮಟಾ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದು ಎನ್ನುವ ಸುದ್ದಿ ಹರಡಿರುವುದು ನನಗಂತೂ ಬೇಸರ ತಂದಿದೆ. ನಾನು ಭಾರತೀಯ ಜನತಾ ಪಕ್ಷಕ್ಕೆ ಬಂದನಂತರ ಪಕ್ಷಕ್ಕಾಗಿ ಹಗಲಿರುಳು ನಿಸ್ವಾರ್ಥತೆಯಿಂದ ದುಡಿಯುತ್ತಿದ್ದೇನೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರುಹಾಗೂ ಮುಖಂಡರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದೇನೆ. ನನ್ನ ಮೈನಲ್ಲಿ ಹರಿಯುತ್ತಿರುವುದು ಹಿಂದು ರಕ್ತ. ನಾನೊಬ್ಬ ಹಿಂದುವಾಗಿ

Read More
Art & Culture General News Karnataka

ಕರಾವಳಿಯೆಲ್ಲೆಡೆ ಸಂಭ್ರಮ ತಂದ ಗಣೇಶ ಚತುರ್ಥಿ

ಕುಮಟಾ : ಕಳೆದ ಮೂರು ತಿಂಗಳಿನಿಂದ ಸುರಿದ ಮಳೆಯಿಂದ ಮರೆಯಾಗಿದ್ದ ಸಂಭ್ರಮ ಗಣೇಶ ಚತುರ್ಥಿಯಿಂದ ಮತ್ತೆ ಮರಳಿದೆ. ಮಳೆಗಾಲದ ಪ್ರಾರಂಭದಿಂದ ಎಡೆಬಿಡದೆ ಸುರಿದ ಮಳೆ, ಶಿರೂರು ಗುಡ್ಡ ಕುಸಿತ, ಉಳುವರೆ ಗ್ರಾಮ ಕೊಚ್ಚಿಹೋಗಿದ್ದು ಕರಾವಳಿಯನ್ನು ಅಕ್ಷರಶಃ ಜರ್ಜರಿತರನ್ನಾಗಿಸಿತು. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಮನೆ ಮನೆ ಬಂದ ಗಣೇಶ ಎಲ್ಲರ ಮನದಲ್ಲೂ ಸಂಭ್ರಮ ತಂದಿರುವುದಂತೂ ಸತ್ಯ. ಇದಕ್ಕೆ ವರುಣ ಕೂಡ ಆಶೀರ್ವದಿಸಿದ್ದು ಭಕ್ತರ ಖುಷಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Read More