ಗುರಿಯ ಪಥವ ತೋರುವ ಗುರುವಿಗೆ ನಮನ – ಸಪ್ಟೆಂಬರ್ 5 ಶಿಕ್ಷಕ ದಿನಾಚರಣೆ :
ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ನಮ್ಮ ಛಲ, ಹಠದ ಜೊತೆಗೆ ಸರಿಯಾದ ಮಾರ್ಗದರ್ಶನ ಮಾಡುವ ಗುರು ನಮ್ಮ ಜೊತೆಗಿರಬೇಕು. ಗುರಿ ಮುಂದೆ ಗುರು ನಮ್ಮ ಹಿಂದೆ ಇದ್ದಾಗ ಮಾತ್ರ ಅದರಲ್ಲಿ ಯಶಸ್ಸು ಸಾಧಿಸ ಬಹುದು ಎನ್ನುವುದು ಪ್ರಾಜ್ಞರ ಅನುಭವ ವಾಣಿ. ಭಗವಂತನ ಅವತಾರ ವೆತ್ತಿದ್ದ ವಿಷ್ಣು ಪರಮಾತ್ಮ ಕೂಡ ರಾಮನಾಗಿದ್ದಾಗ ವಿಶ್ವಾಮಿತ್ರರಲ್ಲಿ, ಕೃಷ್ಣರಾಗಿದಾಗ ಸಾಂಧೀಪನಿ ಮುನಿಯ ಶಿಷ್ಯರಾಗಿ ವಿದ್ಯಾರ್ಜನೆ ಮಾಡಿರುವುದು ಗುರುವಿನ ಮಹತ್ವ ತಿಳಿಸುತ್ತದೆ. ಹಾಗಾಗಿಯೇ ದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳಿರುವುದು.